Friday, 15 May 2020

ತಲೆಗೆ ಬಂದ ತರಲೆ ಪ್ರಶ್ನೆ 😜😇

                     ಹಾಗೆ ಸುಮ್ಮನೆ ಆಲೋಚಿಸಿದಾಗ




ಈ ವಿದೇಶಿ ವಸ್ತುಗಳ ಮರುಳು ಹಿಡಿದಂಥವರಿಗೆ ನನ್ನ ಪ್ರಶ್ನೆ 👉ವಿದೇಶಿ ವಸ್ತುಗಳ ಬಳಸುವಾಗ ಇಲ್ಲದ ಸಂದೇಹಗಳು ಅದೇಕೋ ಸ್ವದೇಶಿ ವಸ್ತುಗಳನ್ನು ಬಳಸುವಾಗ ದಿಢೀರ್ ಎಂದು ಆಲೋಚನೆಗೆ ಬರುವುದುಂಟು ಏತಕೋ ನಾ ಕಾಣೆ🤷‍♀️ ಹಾಗೂ ಈ ಸ್ವದೇಶಿ ವಸ್ತುಗಳಲ್ಲಿ ಕಲಬೆರಕೆ ಮುಂತಾದವುಗಳಿವೆ ಎಂಬುವರಿಗೆ ನನ್ನದೊಂದು ಮಾತು ವಿದೇಶಿ ವಸ್ತುಗಳಲ್ಲಿ ಬಳಕೆಯಾದ ಕಲಬೆರಕೆ ಪದಾರ್ಥ, ವಸ್ತುಗಳಿಂದ ವಿಷವುಣ್ಣುವುದಕ್ಕಿಂತ ಸ್ವದೇಶಿ ವಸ್ತುಗಳಲ್ಲಿನ ವಿಷವುಣ್ಣುವುದು ಮೇಲಲ್ಲವೇ. ಕಾರಣ ಅದು ವಿದೇಶಿ ವಿಷ ಥೇಟ್ ಕೊರೋನ ದ ಥರ ಮದ್ದಿಲ್ಲದಿದ್ದರೆ ಕಷ್ಟ ಅಲ್ವೇ😜😶

#ಸ್ವಾವಲಂಬಿ _ಭಾರತ 🚩

ಸ್ವಾವಲಂಬಿ ಭಾರತ 🚩

ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಇತಿಹಾಸದಲ್ಲಿ ಓದಿದ್ದೇವೆ ಮತ್ತು ಹೆಮ್ಮೆಯಿಂದ ಹೇಳುತ್ತೇವೆ. ಭಾರತ ಎಲ್ಲದರಲ್ಲೂ ನಂ. 1 ಆಗಿ ನೋಡಬಯಸುತ್ತೇವೆ ಮತ್ತು ವಿಶ್ವಗುರು ಆಗಿದ್ದ ದೇಶ ಕೂಡ.
ಈ ಮಹಾಮಾರಿ ಕೊರೋನಾದಿಂದ ಸಂಪೂರ್ಣ ವಿಶ್ವವೇ ನಲುಗಿ ಹೋಗಿದೆ. ಎಲ್ಲ ಕ್ಷೇತ್ರಗಳಲ್ಲೂ ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಬಲಾಢ್ಯವಾಗಿ ಬೆಳೆದು ನಿಂತಿರುವ ದೇಶಗಳೇ ಇಂದು ಮುಗ್ಗರಿಸಿದಂತಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯತ್ತ ಧಾಪುಗಾಲು ಇಡುತ್ತಿದ್ದ ನಮ್ಮ ದೇಶಕ್ಕೂ ಸಹಜವಾಗಿಯೇ ಹೊಡೆತ ಬಿದ್ದಿರುತ್ತದೆ.
ಆದ ಕಾರಣ ಈ ಸಂಧರ್ಭದಲ್ಲಿ ದೇಶದ ಆರ್ಥಿಕ ಬಲವನ್ನು ಹೆಚ್ಚಿಸುವುದು ಬಹುಮುಖ್ಯವಾಗಿದೆ ಮತ್ತು ಈ ದೇಶದ ಪ್ರಜೆಗಳಾದ ನಮಗೆ ಸಮಯ ಬಂದಾಗ ದೇಶದ ಸೇವೆಗಾಗಿ ಸಿದ್ದನಾಗಿರುವುದು ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿಯೂ ನಮ್ಮ ಕರ್ತವ್ಯವೇ ಆಗಿದೆ.
ಇಂತಹ ಸಮಯದಲ್ಲಿ ಯಾವ ರೀತಿ ಸರ್ಕಾರ ಹೇಳಿದಂತೆ ನಮ್ಮ ಆರೋಗ್ಯದ ಹಿತ-ದೃಷ್ಟಿಯಿಂದ ಆರೋಗ್ಯ ಕ್ರಮ ಮತ್ತು ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯವೋ
 ಅದೇರೀತಿ ದೇಶದ ಭದ್ರ-ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರದ ಆರ್ಥಿಕ ಬಲವನ್ನು ಹೆಚ್ಚಿಸುವುದರಲ್ಲಿ ನಮ್ಮ ಸಹಕಾರವೂ ನಮ್ಮ ಆದ್ಯ ಕರ್ತವ್ಯವೇ ಆಗಿದೆ.
ಹಾಗಾಗಿ ಗಡಿಯಲ್ಲಿ ನಿಂತು ಶಸ್ತ್ರ ಹಿಡಿದು ಹೋರಾಡಿಯೆಂದು ಹೇಳುತ್ತಿಲ್ಲ. ಇನ್ನಾದರೂ ವಿದೇಶಿ ಕಂಪನಿ ವಸ್ತುಗಳನ್ನು ಬಳಸುವ ಮರುಳನ್ನು ಬಿಟ್ಟು ದೇಶದ ಆರ್ಥಿಕತೆಗೆ ಆನೆಬಲವನ್ನು ನೀಡಲು ಸ್ವದೇಶಿ ವಸ್ತುಗಳನ್ನೇ ಬಳಸಿ ಎಂಬುದೇ ನನ್ನ ಕೋರಿಕೆ. ನಮ್ಮ ನಿತ್ಯ ಜೀವನದಿ ಬಳಸುವ ಪ್ರತೀ ಸಣ್ಣ ವಿದೇಶಿ ವಸ್ತುವಿನ ಸ್ಥಾನದಲ್ಲಿ  ದೇಶೀಯ ಕಂಪೆನಿಯ ವಸ್ತುಗಳನ್ನೇ ಬಳಸಿ. ಆಗ ನಾವು ದೇಶ ಸೇವೆ ಮಾಡಿದಂತೆಯೇ.

#ಸ್ವಾವಲಂಬಿ ಭಾರತ 🚩