Saturday 29 December 2018

ತೋಚಿದ್ದು....ಗೀಚಿದ್ದು - 4

ತಾಯಿ
ಉಸಿರನಿತ್ತು;ನವ ಮಾಸಗಳ ಕಾಲ ಬಸಿರೊಳು ಬಚ್ಚಿಟ್ಟು, ಮಗುವಿಗೆ ಜನ್ಮವನಿತ್ತು ;
ತಾನು ಪುನರ್ಜನ್ಮ ಪಡೆವ ಮಹಾಮಯಿ "ತಾಯಿ".
✍ನೇತ್ರಾವತಿ ತೀರದಿಂದ.


ಬೆಂಗಳೂರು
ಎತ್ತ ನೋಡಿದರತ್ತ.. ಚಿತ್ತ ಹಾಯಿಸಿದತ್ತ... ಕಸದ ರಾಶಿಯ ಮೊತ್ತ...ಹೀಗೆ ಸಾಗುತಲಿದೆ ಬೆಂಗಳೂರು ಅಭಿವೃದ್ಧಿಯತ್ತ.
✍️ನೇತ್ರಾವತಿ ತೀರದಿಂದ.


ರಕ್ಷಾ ಬಂಧನ
ಪುಟ್ಟ ತಂಗಿಯ ಕೈ ಹಿಡಿದು
ಪ್ರತಿ ಸಣ್ಣ ಕನಸುಗಳಿಗೆ ಬಣ್ಣವನು ಹಚ್ಚಿ
ಅವಳ ನೆಚ್ಚಿನ ಆಸೆಗಳನು ಪತ್ತೆ ಹಚ್ಚಿ...
ಕನಸಿನ ಚಪ್ಪರಕೆ ಏಣಿಯಂತೆ ತಾ ನಿಂತು...
ಇಚ್ಛೆಗಳ ಪೂರೈಸುವವ ಅಣ್ಣ❤️
ಬಣ್ಣಿಸಲಾಗದ, ಬಿಡಿಸಲಾಗದ ಅನುಬಂಧ
ಅಣ್ಣ - ತಂಗಿ ಸಂಬಂಧ.
✍️ನೇತ್ರಾವತಿ ತೀರದಿಂದ.

No comments:

Post a Comment