ಏನಾದರೂ ಮಾಡಿ ನಮ್ಮ ಊರನ್ನು
ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ.
ಏನಾದರೂ ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯ ನೀಡಿ ಸಾಕು. ಹಳ್ಳಿ ಹಳ್ಳಿಯಾಗಿದ್ದರೆ ಚಂದ❤️ ಪೇಟೆ ಪೇಟೆಯಾಗಿ ಇದ್ದರೆ ಅಂದ👍 ಅದರ ಅರ್ಥ ಅಭಿವೃದ್ಧಿ ಬೇಡ ಎಂದಲ್ಲ. ಆದರೆ ಅದಕ್ಕೊಂದು ಮಿತಿ ಇರಬೇಕು. ಪ್ರಕೃತಿಯ ಮೂಲ ಸ್ವರೂಪವನ್ನೇ ತೊಳೆದು ಹಾಕುವಂತಹ ಅಭಿವೃದ್ಧಿಯಾದಾಗ ಪ್ರಕೃತಿ ಖಂಡಿತವಾಗಿಯೂ ಒಂದಲ್ಲ ಒಂದು ದಿನ ತನ್ನ ಆಕ್ರೋಶವನ್ನು ಹೊರ ಹಾಕಿಯೇ ಹಾಕುತ್ತಾಳೆ.
ಇದಕ್ಕೆ ನೈಜ ಉದಾಹರಣೆ ಈಗ ಕಣ್ಣ ಮುಂದಿರುವ ಮದ್ದಿಲ್ಲದ ಕೊರೋನ. ಇನ್ನೊಂದು ತಾಜಾ ಉದಾಹರಣೆ ಹಿಂದೆಂದೂ ನಾವು ಕಂಡಿರದ ಕಳೆದ ವರ್ಷದ ನೇತ್ರಾವತಿಯ ನದಿಯ ಪ್ರವಾಹ (9/08/2019) .ಕಾರಣ ಹುಡುಕಿದರೆ ನದಿಯ ಈ ಪರಿ ಕ್ರೋಧಕ್ಕೆ ಅಂದು ನಾವೇ ಕಾರಣರು ಎಂದೆನಿಸುವುದು. ರಾಜಕಾರಣ ಏನೇ ಇರಲಿ ಆದರೆ ಪ್ರಕೃತಿಗೆ ಅದು ವಿಷಯವೇ ಅಲ್ಲ. ಅಂದು ಇದೇ ನೇತ್ರಾವತಿ ನದಿ ತಿರುವು ಯೋಜನೆ ಎಂದೇ ಕರೆಸಿಕೊಳ್ಳುವ ಎತ್ತಿನ ಹೊಳೆ ಯೋಜನೆಯನ್ನು ಸರ್ಕಾರ ಮಾಡುವಾಗ ದಕ್ಷಿಣ ಕನ್ನಡ ಜನರ "ಮೌನದ ಫಲವೇ" ಇಂದು ಅನುಭವಿಸುತ್ತಿದ್ದೇವೆ.
ಸರ್ಕಾರ ಯಾವುದೇ ಇರಲಿ ಅದು ತಪ್ಪು ಮಾಡಿದಾಗ ಖಂಡಿಸುವ ಬುದ್ದಿ ನಮ್ಮಲಿರಬೇಕು. ಅದು ಬಿಟ್ಟು ಅದರ ಪಾಡಿಗೆ ಏನೋ ಮಾಡುತ್ತಿದೆ ನಮಗೇನು ಕಷ್ಟ ಬಂದಾಗ ನೋಡಿಕೊಳ್ಳೋಣ ಎಂದರೆ ಇದೇ ಆಗುವುದು. ಅಂದು ನೇತ್ರಾವತಿಯ ಒಡಲನ್ನು ,ಸುತ್ತಲಿನ ಬೆಟ್ಟ ಗುಡ್ಡಗಳನ್ನು ಅಗೆದು-ಬಗೆದು ಪ್ರಕೃತಿಮಾತೆಯ ಮೂಲಸ್ವರೂಪವನ್ನು ಛಿದ್ರಗೊಳಿಸಿದ ಪರಿಣಾಮ ಮಂಗಳೂರಿಗೆ ಮಂಗಳೂರೇ ಮುಳುಗಿ ಮುಗಿದು ಹೋಗುವುದರಲ್ಲಿತ್ತು ಆದರೆ ದೇವರ ದಯೆಯಿತ್ತು🙏 ಪ್ರಕೃತಿಗೆ ಮನುಜನ ಮೇಲೆ ಇನ್ನೂ ಕರುಣೆ ಉಳಿದಿತ್ತು 👍ಆದ ಕಾರಣ ಜೀವಗಳನು ಉಳಿಸಿತ್ತು.
ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ.
ಆದರೆ 24*7 ರಾಜಕೀಯವನ್ನು ಮಾಡುತ್ತಿರುವುದು, ಕೇಳಿದ್ದನ್ನು ಕೊಡದೆ; ಆಲೋಚಿಸದೆ ಮಾಡುವ ಕೆಲಸಗಳನ್ನು ನೋಡುತ್ತಿರುವ ನಾನು ಈ ಮಾತನ್ನು ಹೇಳಲೇಬೇಕು ಎಂದೆನಿಸಿ ಅಕ್ಷರಗಳಿಗಿಳಿಸಿರುವೆ.
ಇದುವರೆಗೂ ಇಲ್ಲಿ ಅಭಿವೃದ್ಧಿ ಬಿಡಿ ಸಂಪರ್ಕ ನೀಡುವ ಕೆಲಸ ಬಾಯಲ್ಲಿ ಮಾಡಿದ್ದೇ ಹೆಚ್ಚು. ಆದ ಕಾರಣ ಅಭಿವೃದ್ಧಿ ಹೆಚ್ಚಾದರೆ ಪ್ರಕೃತಿ-ಮನುಷ್ಯ ಇಬ್ಬರಿಗೂ ಹಾಳು. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು👍ಕಡಿಮೆ ಖರ್ಚಿನಲ್ಲಿ ಗರಿಷ್ಠ ಅಭಿವೃದ್ಧಿ ಮಾಡು ಈ ಸೂತ್ರ ನಮ್ಮ ಊರ ಮತ್ತು ಊರ ಜನರ ಅಭಿವೃದ್ಧಿಗೆ ಸಾಕು.
ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಿ ಅವಳು ನಮ್ಮನ್ನು ಸದಾ ಕಾಯುವಳು. ಅಭಿವೃದ್ಧಿ ಮಾಡಿ ಅದು ತಪ್ಪಲ್ಲ. ಆದರೆ ಅವಳ ಸ್ವರೂಪವನ್ನು ಕುರೂಪಗೊಳಿಸದಿರಿ. ಹಾಗೆಯೇ ಊರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಮಾಡಿ ಆದರೆ ಊರು ಮುಂದೆ ಮುಳುಗದಿರಲಿ, ಕೃಷಿಗೆ ,ಊರಿನ ಜನ ಜೀವನಕ್ಕೆ ,ಊರನು ಕಾಯುವ ಶಕ್ತಿಗಳಿಗೆ ಅಡ್ಡಿಯಾಗಡಿರಲಿ ಅಷ್ಟೇ ನನ್ನ ಮಾತು.
ಇದು ನಮಗೆ ಪ್ರಕೃತಿ ನೀಡಿದ ಮತ್ತೊಂದು ಅವಕಾಶ 'ಹೇ ಮನುಜ ತಪ್ಪನ್ನು ತಿದ್ದಿಕೋ 'ಎಂದರೆ ತಪ್ಪಲ್ಲ.
ಪರಿವರ್ತನೆ ಜಗದ ನಿಯಮವೆಂಬ ವಾಕ್ಯವನ್ನು ನಾವರಿತುಕೊಳ್ಳೋಣ. ಬದಲಾಗೋಣ ಪ್ರಕೃತಿಯನ್ನು ಬದುಕಲು ಬಿಡೋಣ.... ಜೀವಗಳಿಗೆ ಜೀವನವನ್ನು ಕೊಡುವ ಆ ಜೀವಕ್ಕೂ ಜೀವವಿದೆ ಎಂಬುದನು ತಿಳಿಯೋಣ.
✍️ ನೇತ್ರಾವತಿ ತೀರದಿಂದ.
ಮತ್ತೆ ಮರಳಿ ಬರುವೆನೆಂಬ ಹೊಸ ಭರವಸೆಯಲಿ: ತೂಗುಸೇತುವೆ 😍❤️
No comments:
Post a Comment