ಪ್ರಕೃತಿಯೇ ಪರಮಾತ್ಮ
ಪೂರ್ವಿಕರೇ ನುಡಿದ ಮಾತಿದು ಕೇಳು
ಪ್ರಕೃತಿಯಲಿ ಪರಮಾತ್ಮನ ಕಾಣೆಂದು|
ಆದರೆ... ಮನದೊಳು ಸದಾ
ಸ್ವಾರ್ಥವ ತುಂಬಿಹ ಹೇ...ಮನುಜನೆ ಹೇಳು
ನಿನ್ನಾ ದುರಾಸೆಗೆ ಮಿತಿ ಎಂದು!???
ಪುರದ ಹಿತವನು ಬಯಸದ ನಾಯಕರು
ಪಕ್ಷ ರಾಜಕೀಯ ಮಾಡುತಲಿ।
ಪ್ರಾಣಿ ಪಕ್ಷಿಗಳ ಪ್ರಾಣವ ಹಿಂಡುತ ...
ಪರಿಸರ ಕೆಡಿಸುತ.. ಪಟ್ಟಣ ಕಟ್ಟುತ
ಅಭಿವೃದ್ಧಿಯ ಹಿಂದೆ ತಾ ಓಡೋಡುತಲಿ ||
ಪುಕ್ಕಟೆ ಕಾಸಿನ ಆಸೆಯ ತೋರಿಸಿ
ಪ್ರಜೆಗಳ ಮನಸನು ಬೇರೆಡೆ ಹರಿಸಿ
ಹಸಿರನು ಕರಗಿಸಿ... ಭೂಮಿಯ ಕಬಳಿಸಿ
ಸರಿ ತಪ್ಪು ಲೆಕ್ಕಿಸಿ...
ಪರಿಸರ ರಕ್ಷಣೆ ನಾಟಕವನಾಡುತಲಿ ||
ಕಾಲವು ಉರುಳಿತು ... ಕೊರೋನ ಬಂದಿತು
ಕಾಣದ ವೈರಾಣುವು.. ಪಾಪಿ ಮನುಜ ಕುಲವ ನಡುಗಿಸಿತು...
ಮರಣ ಮೃದಂಗವನೆ ಬಾರಿಸಿತು|
ಪ್ರಕೃತಿಯು ಮುನಿದರೆ ಮನುಜನು ಉಳಿವನೆ ?!
ಎಂಬ ನೀತಿಯ ಕಲಿಸುತಲಿ ||
ಅರಸುತಲಿಂದು ಪರಿಹಾರದ ಸೂತ್ರವ
ಪ್ರಾಣ ಪಕ್ಷಿಯ ಉಳಿಸುವ ಸಲುವಿನಲಿ
ಪ್ರಸ್ತುತ ಪರಿಸ್ಥಿತಿಗೆ ಪರಿತಪಿಸಿ ಫಲವಿಲ್ಲ
ಪೂರ್ವಿಕರ ಮಾತದು ಸತ್ಯ ನೆನಪಿರಲಿ ||
ಪರಂಪರೆ ಮರೆಯದೆ .... ಪರಿಸರ ಕೆಡಿಸದೆ
ಪುನಃ ಪೂಜಿಸು ನೀನು ಅವಳನಿಂದು..
ಪೊರೆವಳು ನಮ್ಮನು ಎಂದೆಂದೂ ||
✍️ ನೇತ್ರಾವತಿ ತೀರದಿಂದ
No comments:
Post a Comment