Saturday, 15 August 2020

ಶ್ರೀರಾಮ ಮಂದಿರ ಕನಸು ❤️🚩

ಕಾತರಸಿ ಕಾಯುತಿದೆ ಕೋಟಿ ಕಣ್ಣುಗಳು

ಭವ್ಯ ಮಂದಿರದೊಳು ನಿನ್ನನು ಕಾಣಲು

ಫಲ-ಪುಷ್ಪ ಪೂಜಾರತಿಗಳು ಕಾದಿರೆ

ನಿನಗೆಂದೇ ಅರ್ಪಿಸಲು...

ಮನೆಮನೆಯಲೂ ಹಾರಲಿ ಕೇಸರಿ ದ್ವಜ 🚩

ಎಲ್ಲೆಡೆಯೂ ಮೊಳಗಲಿ ರಾಮನಾಮ ಜಯಘೋಷ

ಧರ್ಮ ಪುನಃಸ್ಥಾಪನೆಗೆ ನಾಂದಿಯಾಗಲಿರುವ ಈ ವರ್ಷ

ಹೊತ್ತು ತರಲಿದೆ ಭರತವರ್ಷಕ್ಕೆ ಹರುಷ 😃


✍️ ನೇತ್ರಾವತಿ ತೀರದಿಂದ.



#ಮಂದಿರವಲ್ಲೇ ಕಟ್ಟುವೆವು 😍🚩

#ಜೈ ಶ್ರೀ ರಾಮ್ 🙏🚩

#ಆಗಸ್ಟ್ 5 ,2020 ರಾಮ ಮಂದಿರ ಭೂಮಿ ಪೂಜಾ ❤️

#ಜೈ ಭವಾನಿ🚩

#ಶ್ರೀರಾಮ ಜಯ ರಾಮ ಜಯ ಜಯ ರಾಮ 😍🚩🙏💐


✍️ತೋಚಿದ್ದು.... ಗೀಚಿದ್ದು -8







 

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ.

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ. ಕಾರಣ ಕಣ್ಣ ಮುಂದೆ ನಡೆದು ಹೋಗುವ ಕೆಲವೊಂದು ಘಟನೆಗಳು ಅಚ್ಚಳಿಯದೆ ಉಳಿಯುವವು. ದೋಣಿಯ ಮೂಲಕ ಜೀವನ ಬಂಡಿಯನು ನಡೆಸುತ್ತಿದ್ದ ನಮ್ಮೂರಿಗೆ 2013ರಲ್ಲಿ ಪರಿಚಯವಾದ ಸ್ನೇಹಿತ ನೀನು.

ಬಹಳ ವರ್ಷಗಳ ಬಳಿಕ ಬದುಕಿನ ಒಡನಾಡಿಯಾಗಿ ಊರಿಗೆ ಬಂದ ನಿನ್ನನ್ನು ; ಕೆಲವು ಮನಸುಗಳ ಬಡಿದಾಟದಿಂದ ಸರಿಯಾಗಿ ಬರಮಾಡಿಕೊಳ್ಳಲು ಆಗಲೇ ಇಲ್ಲ. ಆದರೂ ನೀನು ಏಳು ವರ್ಷಗಳ ಕಾಲ ನಮ್ಮ ಬದುಕಿನ ಏಳುಬೀಳುಗಳಲ್ಲಿ ಒಡನಾಡಿಯಾಗಿ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿಯಾಗಿ, ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲಾಗಿ, ಪ್ರವಾಸಿಗರನು ಊರಿಗೆ ಕೈ ಬೀಸಿ ಕರೆದು ಅವರ ಪ್ರಯಾಸವನಿಳಿಸೋ ಮಿತ್ರನಾಗಿ, ಊರಿಗೆ ಸಂಪರ್ಕ ಸೇತುವೆಯಾಗಿ ಜೀವನಾಧಾರದ ವ್ಯವಸ್ಥೆಯಾದೆ. 

ಇಂದು ಮತ್ತದೇ ದಿನ ಮರಳಿ ಬಂದಿದೆ, ನಿನ್ನೊಂದಿಗೆ ಕಳೆದಿಹ ಮರೆಯಲಾಗದ ನೆನಪುಗಳು ಮರುಕಳಿಸುತ್ತಿವೆ. ಆ ದಿನವೇ ಆಗಸ್ಟ್ 09/08/2019 ಅಂದರೆ ಇಂದು. ಆಶ್ಲೇಷ ಮಹಾನಕ್ಷತ್ರ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮನಸಿನಿಂದ ಮಾಸಲಾಗದಂತಹ ಘಟನೆ ನಡೆದು ಹೋಗಿ ಜೀವನಾಧಾರವಾಗಿದ್ದ ತೂಗುಸೇತುವೆಯ ಕೊಂಡಿಯು ಕಳಚಿಕೊಂಡಿತ್ತು . 

ಕೆಲವೊಂದು ಬಾರಿ ವಾಸ್ತವವಾಗಿ ಪರ್ಜನ್ಯ ನ ಕೋಪಕ್ಕೆ ತುತ್ತಾಗಿ ತೂಗುಸೇತುವೆಯನ್ನು ಕಳೆದುಕೊಂಡೆವು ಎನ್ನುವುದಕ್ಕಿಂತ ನಾವು ಮಾಡಿದ ಕೆಲಸದಿಂದಾಗಿ ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ(ಕಳೆದುಕೊಳ್ಳುತ್ತೇವೆ ಕೂಡ).

ಅದೇನೇ ಇರಲಿ ತುಂಬಿ ಹರಿವ ನೇತ್ರಾವತಿಯ ತೀರದಿ ಬದುಕನ್ನು ಕಟ್ಟಿಕೊಂಡಿರುವ ನಮ್ಮ ಊರಿಗೆ ನಿನ್ನೆ ಬಂದ 'ಸುದ್ದಿ'ಯಲ್ಲಿ ಮನಸದು ಹರುಷದಿ ತುಂಬಿದೆ. ಅದಕ್ಕೆ ಕಾರಣವೂ ನೀನೆ ಏಕೆಂದರೆ ನೀನು ಮತ್ತೆ ಮರಳಿ ಬರುತ್ತಿದ್ದೀಯ ❤️😍.

ವಿಷಾದವಿದೆ ಇಂದು ನಿನ್ನ ಕಳೆದು ಕೊಂಡ ದಿನವು ಹೌದು👍ಮತ್ತೆ ಜೀವನದಿ ಒಡನಾಡಿಯಾಗಿ ಹುಟ್ಟಿ ಬರುವೆ ಎಂದು ಸಿಹಿಸುದ್ದಿ ಕೇಳಿದ ದಿನವೂ ಹೌದು 😍.


 ✍️ನೇತ್ರಾವತಿ ತೀರದಿಂದ.


🤩 "ಮತ್ತೆ ನಾನು ಹುಟ್ಟಿ ಬರುವೆ  ಬದುಕಿನಲಿ ಹೊಸ ಭರವಸೆಗಳ ಹೊತ್ತು ತರುವೆ"🤩


✍️ಇಂತೀ ನಿಮ್ಮವನು


-ತೂಗುಸೇತುವೆ 😍





Monday, 29 June 2020

ಏನಾದರೂ ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ.

ಏನಾದರೂ ಮಾಡಿ ನಮ್ಮ ಊರನ್ನು 
ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. 


ಏನಾದರೂ  ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯ ನೀಡಿ ಸಾಕು. ಹಳ್ಳಿ ಹಳ್ಳಿಯಾಗಿದ್ದರೆ ಚಂದ❤️ ಪೇಟೆ ಪೇಟೆಯಾಗಿ ಇದ್ದರೆ ಅಂದ👍 ಅದರ ಅರ್ಥ ಅಭಿವೃದ್ಧಿ ಬೇಡ ಎಂದಲ್ಲ. ಆದರೆ ಅದಕ್ಕೊಂದು ಮಿತಿ ಇರಬೇಕು. ಪ್ರಕೃತಿಯ ಮೂಲ ಸ್ವರೂಪವನ್ನೇ ತೊಳೆದು ಹಾಕುವಂತಹ ಅಭಿವೃದ್ಧಿಯಾದಾಗ ಪ್ರಕೃತಿ ಖಂಡಿತವಾಗಿಯೂ ಒಂದಲ್ಲ ಒಂದು ದಿನ ತನ್ನ ಆಕ್ರೋಶವನ್ನು ಹೊರ ಹಾಕಿಯೇ ಹಾಕುತ್ತಾಳೆ.

ಇದಕ್ಕೆ ನೈಜ ಉದಾಹರಣೆ ಈಗ ಕಣ್ಣ ಮುಂದಿರುವ ಮದ್ದಿಲ್ಲದ ಕೊರೋನ. ಇನ್ನೊಂದು ತಾಜಾ ಉದಾಹರಣೆ ಹಿಂದೆಂದೂ ನಾವು ಕಂಡಿರದ ಕಳೆದ ವರ್ಷದ ನೇತ್ರಾವತಿಯ ನದಿಯ ಪ್ರವಾಹ (9/08/2019) .ಕಾರಣ ಹುಡುಕಿದರೆ ನದಿಯ ಈ ಪರಿ ಕ್ರೋಧಕ್ಕೆ ಅಂದು ನಾವೇ ಕಾರಣರು ಎಂದೆನಿಸುವುದು. ರಾಜಕಾರಣ ಏನೇ ಇರಲಿ ಆದರೆ ಪ್ರಕೃತಿಗೆ ಅದು ವಿಷಯವೇ ಅಲ್ಲ. ಅಂದು ಇದೇ ನೇತ್ರಾವತಿ ನದಿ ತಿರುವು ಯೋಜನೆ ಎಂದೇ ಕರೆಸಿಕೊಳ್ಳುವ ಎತ್ತಿನ ಹೊಳೆ ಯೋಜನೆಯನ್ನು ಸರ್ಕಾರ ಮಾಡುವಾಗ ದಕ್ಷಿಣ ಕನ್ನಡ ಜನರ "ಮೌನದ ಫಲವೇ" ಇಂದು ಅನುಭವಿಸುತ್ತಿದ್ದೇವೆ.
 ಸರ್ಕಾರ ಯಾವುದೇ ಇರಲಿ ಅದು ತಪ್ಪು ಮಾಡಿದಾಗ ಖಂಡಿಸುವ ಬುದ್ದಿ ನಮ್ಮಲಿರಬೇಕು. ಅದು ಬಿಟ್ಟು ಅದರ ಪಾಡಿಗೆ ಏನೋ ಮಾಡುತ್ತಿದೆ ನಮಗೇನು ಕಷ್ಟ ಬಂದಾಗ ನೋಡಿಕೊಳ್ಳೋಣ ಎಂದರೆ ಇದೇ ಆಗುವುದು. ಅಂದು ನೇತ್ರಾವತಿಯ ಒಡಲನ್ನು ,ಸುತ್ತಲಿನ ಬೆಟ್ಟ ಗುಡ್ಡಗಳನ್ನು ಅಗೆದು-ಬಗೆದು ಪ್ರಕೃತಿಮಾತೆಯ ಮೂಲಸ್ವರೂಪವನ್ನು ಛಿದ್ರಗೊಳಿಸಿದ ಪರಿಣಾಮ ಮಂಗಳೂರಿಗೆ ಮಂಗಳೂರೇ ಮುಳುಗಿ ಮುಗಿದು ಹೋಗುವುದರಲ್ಲಿತ್ತು ಆದರೆ ದೇವರ ದಯೆಯಿತ್ತು🙏 ಪ್ರಕೃತಿಗೆ ಮನುಜನ ಮೇಲೆ ಇನ್ನೂ ಕರುಣೆ ಉಳಿದಿತ್ತು 👍ಆದ ಕಾರಣ ಜೀವಗಳನು ಉಳಿಸಿತ್ತು.
ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ.
ಆದರೆ 24*7 ರಾಜಕೀಯವನ್ನು ಮಾಡುತ್ತಿರುವುದು, ಕೇಳಿದ್ದನ್ನು ಕೊಡದೆ; ಆಲೋಚಿಸದೆ ಮಾಡುವ ಕೆಲಸಗಳನ್ನು ನೋಡುತ್ತಿರುವ ನಾನು ಈ ಮಾತನ್ನು ಹೇಳಲೇಬೇಕು ಎಂದೆನಿಸಿ ಅಕ್ಷರಗಳಿಗಿಳಿಸಿರುವೆ.
ಇದುವರೆಗೂ ಇಲ್ಲಿ ಅಭಿವೃದ್ಧಿ ಬಿಡಿ ಸಂಪರ್ಕ ನೀಡುವ ಕೆಲಸ ಬಾಯಲ್ಲಿ ಮಾಡಿದ್ದೇ ಹೆಚ್ಚು. ಆದ ಕಾರಣ ಅಭಿವೃದ್ಧಿ ಹೆಚ್ಚಾದರೆ ಪ್ರಕೃತಿ-ಮನುಷ್ಯ ಇಬ್ಬರಿಗೂ ಹಾಳು. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು👍ಕಡಿಮೆ ಖರ್ಚಿನಲ್ಲಿ ಗರಿಷ್ಠ ಅಭಿವೃದ್ಧಿ ಮಾಡು ಈ ಸೂತ್ರ ನಮ್ಮ ಊರ ಮತ್ತು ಊರ ಜನರ ಅಭಿವೃದ್ಧಿಗೆ ಸಾಕು.

ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಿ ಅವಳು ನಮ್ಮನ್ನು ಸದಾ ಕಾಯುವಳು. ಅಭಿವೃದ್ಧಿ ಮಾಡಿ ಅದು ತಪ್ಪಲ್ಲ. ಆದರೆ ಅವಳ ಸ್ವರೂಪವನ್ನು ಕುರೂಪಗೊಳಿಸದಿರಿ. ಹಾಗೆಯೇ ಊರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಮಾಡಿ ಆದರೆ ಊರು ಮುಂದೆ ಮುಳುಗದಿರಲಿ, ಕೃಷಿಗೆ ,ಊರಿನ ಜನ ಜೀವನಕ್ಕೆ ,ಊರನು ಕಾಯುವ ಶಕ್ತಿಗಳಿಗೆ ಅಡ್ಡಿಯಾಗಡಿರಲಿ ಅಷ್ಟೇ ನನ್ನ ಮಾತು.

ಇದು ನಮಗೆ ಪ್ರಕೃತಿ ನೀಡಿದ ಮತ್ತೊಂದು ಅವಕಾಶ 'ಹೇ ಮನುಜ ತಪ್ಪನ್ನು ತಿದ್ದಿಕೋ 'ಎಂದರೆ ತಪ್ಪಲ್ಲ.
ಪರಿವರ್ತನೆ ಜಗದ ನಿಯಮವೆಂಬ ವಾಕ್ಯವನ್ನು ನಾವರಿತುಕೊಳ್ಳೋಣ. ಬದಲಾಗೋಣ ಪ್ರಕೃತಿಯನ್ನು ಬದುಕಲು ಬಿಡೋಣ.... ಜೀವಗಳಿಗೆ ಜೀವನವನ್ನು ಕೊಡುವ ಆ ಜೀವಕ್ಕೂ ಜೀವವಿದೆ ಎಂಬುದನು ತಿಳಿಯೋಣ.


✍️ ನೇತ್ರಾವತಿ ತೀರದಿಂದ.

ಮತ್ತೆ ಮರಳಿ ಬರುವೆನೆಂಬ ಹೊಸ ಭರವಸೆಯಲಿ: ತೂಗುಸೇತುವೆ 😍❤️



Friday, 15 May 2020

ತಲೆಗೆ ಬಂದ ತರಲೆ ಪ್ರಶ್ನೆ 😜😇

                     ಹಾಗೆ ಸುಮ್ಮನೆ ಆಲೋಚಿಸಿದಾಗ




ಈ ವಿದೇಶಿ ವಸ್ತುಗಳ ಮರುಳು ಹಿಡಿದಂಥವರಿಗೆ ನನ್ನ ಪ್ರಶ್ನೆ 👉ವಿದೇಶಿ ವಸ್ತುಗಳ ಬಳಸುವಾಗ ಇಲ್ಲದ ಸಂದೇಹಗಳು ಅದೇಕೋ ಸ್ವದೇಶಿ ವಸ್ತುಗಳನ್ನು ಬಳಸುವಾಗ ದಿಢೀರ್ ಎಂದು ಆಲೋಚನೆಗೆ ಬರುವುದುಂಟು ಏತಕೋ ನಾ ಕಾಣೆ🤷‍♀️ ಹಾಗೂ ಈ ಸ್ವದೇಶಿ ವಸ್ತುಗಳಲ್ಲಿ ಕಲಬೆರಕೆ ಮುಂತಾದವುಗಳಿವೆ ಎಂಬುವರಿಗೆ ನನ್ನದೊಂದು ಮಾತು ವಿದೇಶಿ ವಸ್ತುಗಳಲ್ಲಿ ಬಳಕೆಯಾದ ಕಲಬೆರಕೆ ಪದಾರ್ಥ, ವಸ್ತುಗಳಿಂದ ವಿಷವುಣ್ಣುವುದಕ್ಕಿಂತ ಸ್ವದೇಶಿ ವಸ್ತುಗಳಲ್ಲಿನ ವಿಷವುಣ್ಣುವುದು ಮೇಲಲ್ಲವೇ. ಕಾರಣ ಅದು ವಿದೇಶಿ ವಿಷ ಥೇಟ್ ಕೊರೋನ ದ ಥರ ಮದ್ದಿಲ್ಲದಿದ್ದರೆ ಕಷ್ಟ ಅಲ್ವೇ😜😶

#ಸ್ವಾವಲಂಬಿ _ಭಾರತ 🚩

ಸ್ವಾವಲಂಬಿ ಭಾರತ 🚩

ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಇತಿಹಾಸದಲ್ಲಿ ಓದಿದ್ದೇವೆ ಮತ್ತು ಹೆಮ್ಮೆಯಿಂದ ಹೇಳುತ್ತೇವೆ. ಭಾರತ ಎಲ್ಲದರಲ್ಲೂ ನಂ. 1 ಆಗಿ ನೋಡಬಯಸುತ್ತೇವೆ ಮತ್ತು ವಿಶ್ವಗುರು ಆಗಿದ್ದ ದೇಶ ಕೂಡ.
ಈ ಮಹಾಮಾರಿ ಕೊರೋನಾದಿಂದ ಸಂಪೂರ್ಣ ವಿಶ್ವವೇ ನಲುಗಿ ಹೋಗಿದೆ. ಎಲ್ಲ ಕ್ಷೇತ್ರಗಳಲ್ಲೂ ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಬಲಾಢ್ಯವಾಗಿ ಬೆಳೆದು ನಿಂತಿರುವ ದೇಶಗಳೇ ಇಂದು ಮುಗ್ಗರಿಸಿದಂತಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯತ್ತ ಧಾಪುಗಾಲು ಇಡುತ್ತಿದ್ದ ನಮ್ಮ ದೇಶಕ್ಕೂ ಸಹಜವಾಗಿಯೇ ಹೊಡೆತ ಬಿದ್ದಿರುತ್ತದೆ.
ಆದ ಕಾರಣ ಈ ಸಂಧರ್ಭದಲ್ಲಿ ದೇಶದ ಆರ್ಥಿಕ ಬಲವನ್ನು ಹೆಚ್ಚಿಸುವುದು ಬಹುಮುಖ್ಯವಾಗಿದೆ ಮತ್ತು ಈ ದೇಶದ ಪ್ರಜೆಗಳಾದ ನಮಗೆ ಸಮಯ ಬಂದಾಗ ದೇಶದ ಸೇವೆಗಾಗಿ ಸಿದ್ದನಾಗಿರುವುದು ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿಯೂ ನಮ್ಮ ಕರ್ತವ್ಯವೇ ಆಗಿದೆ.
ಇಂತಹ ಸಮಯದಲ್ಲಿ ಯಾವ ರೀತಿ ಸರ್ಕಾರ ಹೇಳಿದಂತೆ ನಮ್ಮ ಆರೋಗ್ಯದ ಹಿತ-ದೃಷ್ಟಿಯಿಂದ ಆರೋಗ್ಯ ಕ್ರಮ ಮತ್ತು ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯವೋ
 ಅದೇರೀತಿ ದೇಶದ ಭದ್ರ-ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರದ ಆರ್ಥಿಕ ಬಲವನ್ನು ಹೆಚ್ಚಿಸುವುದರಲ್ಲಿ ನಮ್ಮ ಸಹಕಾರವೂ ನಮ್ಮ ಆದ್ಯ ಕರ್ತವ್ಯವೇ ಆಗಿದೆ.
ಹಾಗಾಗಿ ಗಡಿಯಲ್ಲಿ ನಿಂತು ಶಸ್ತ್ರ ಹಿಡಿದು ಹೋರಾಡಿಯೆಂದು ಹೇಳುತ್ತಿಲ್ಲ. ಇನ್ನಾದರೂ ವಿದೇಶಿ ಕಂಪನಿ ವಸ್ತುಗಳನ್ನು ಬಳಸುವ ಮರುಳನ್ನು ಬಿಟ್ಟು ದೇಶದ ಆರ್ಥಿಕತೆಗೆ ಆನೆಬಲವನ್ನು ನೀಡಲು ಸ್ವದೇಶಿ ವಸ್ತುಗಳನ್ನೇ ಬಳಸಿ ಎಂಬುದೇ ನನ್ನ ಕೋರಿಕೆ. ನಮ್ಮ ನಿತ್ಯ ಜೀವನದಿ ಬಳಸುವ ಪ್ರತೀ ಸಣ್ಣ ವಿದೇಶಿ ವಸ್ತುವಿನ ಸ್ಥಾನದಲ್ಲಿ  ದೇಶೀಯ ಕಂಪೆನಿಯ ವಸ್ತುಗಳನ್ನೇ ಬಳಸಿ. ಆಗ ನಾವು ದೇಶ ಸೇವೆ ಮಾಡಿದಂತೆಯೇ.

#ಸ್ವಾವಲಂಬಿ ಭಾರತ 🚩