ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲ
ತಾಕತ್ತು 'ಮತ'ಕ್ಕಿದೆ .
ಪ್ರಜಾಪ್ರಭುತ್ವದ ' ಬ್ರಹ್ಮಾ ಸ್ತ್ರ'ವೆಂದೇ ಪರಿಗಣಿಸಬಹುದಾದಂತಹ ಅಂಶವೆಂದರೆ ಅದು ಮತ/ಮತದಾನ .
ಇಲ್ಲಿ ಬ್ರಹ್ಮಾಸ್ತ್ರ ಎಂದು ಸೂಚಿಸಲು ಕಾರಣಗಳು ಇವೆ. ನಮ್ಮದು ಪ್ರಜಾಪ್ರಭುತ್ವ , ಜಾತ್ಯಾತೀತ ರಾಷ್ಟ್ರ. ಈಗ ಆಡಳಿತದ ಬಗ್ಗೆ ನೋಡುವುದಾದರೆ; ನಮ್ಮ ದೇಶ ಪುರಾತನ ಸಂಸ್ಕೃತಿಯನ್ನೊಳಗೊಂಡು , ಹೆಸರಾಂತ ಮನೆತನಗಳಲ್ಲಿ ಹುಟ್ಟಿ;
ಬಾಳಿ-ಬದುಕಿ ಆಡಳಿತವನ್ನು ನಡೆಸಿದ ದಿಟ್ಟ ರಾಜರುಗಳು ಆಳಲ್ಪಟ್ಟ ದೇಶ ನಮ್ಮದು .
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತಕ್ಕೆ ಅಜಗಜಾಂತರ ವೆತ್ಯಾಸಗಳಿದ್ದರೂ ಕೂಡ ಇಂದಿಗೂ ದೇಶದಲ್ಲಿ ಕೆಲವೊಂದು ಸಮಸ್ಯೆಗಳು ಜಟಿಲವಾಲಾಗುತ್ತಿರಲು ಕಾರಣ ಈ ಅಧಿಕಾರದ ಆಸೆಯೇ ಅಲ್ಲವೇ??? ..... ಅದೇನೇ ಇರಲಿ , ಈಗ ಮತದಾನದ ವಿಷಯಕ್ಕೆ ಬರುವುದಾದರೆ; ಸಾಂವಿಧಾನಿಕವಾಗಿ ಮತದಾನ ಎಂದರೆ ನಮ್ಮ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ. ಆದರೆ ಇಂದಿದು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ನಾನು ಹೇಳ ಬೇಕಾಗಿಲ್ಲ .
ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜಕೀಯ ಕಚ್ಚಾಟಗಳೂ ಆರಂಭವಾಗಿದೆ. ಪಕ್ಷ-ಪ್ರತಿಪಕ್ಷಗಳು ಮಾಧ್ಯಮಗಳಲ್ಲಿ ಹೇಳಿಕೆಗಳ ಮೇಲೆ ಹೇಳಿಕೆಗಳು ಬಾಣ -ತಿರುಗುಬಾಣಗಳಂತೆ ದಿನಂಪ್ರತಿ ನೋಡುತ್ತಿದ್ದೇವೆ. ಇಂತಹ ಸಂಧರ್ಭದಲ್ಲಿ ಚುನಾವಣೆ ಕುರಿತು ನಾಲ್ಕು ಸಾಲುಗಳನ್ನ ಗೀಚಿದರೇನೆಂದು ಕುಳಿತೆ.
ಆಗ ನನಗೆ ತೋಚಿದ್ದೇ ಮತ/ಮತದಾನ. ಎರಡೇ ಅಕ್ಷರವಾದ್ರು, ಎಷ್ಟೊಂದು ಪವರ್ ಫುಲ್ ಆಲ್ವಾ!!! ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚಲಾಯಿಸಲು ಅವಕಾಶಸಿಗುವಂತಹ ಒಂದು ಹಕ್ಕು. ದೇಶದ ಹೊಲಸು ರಾಜಕಾರಣದ ಅರಿವಿರುವ ನಾವು; ಯಾವುದೇ ತಪ್ಪು ನಿರ್ಧಾರ ಕೈಗೊಳ್ಳದೇ ನಮ್ಮ ಅಮೂಲ್ಯ ಮತ ಪೋಲಾಗದೇ ಇರುವಂತಹ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.
ಯುವಜನತೆ ಎಚ್ಚೆತ್ತುಕೊಂಡಾಗ ಮಾತ್ರ ದೇಶದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ. ಅಕ್ಷರಸ್ಥ ಜನರೇ ತಪ್ಪು ಮಾಡಿದಾಗ ನಿರೀಕ್ಷಿತ ಬದಲಾವಣೆಗಳು ಅಸಾಧ್ಯ . ಈ ರೀತಿಯಾದಂತಹ ಮನೋಭಾವನೆ ಜನರಲ್ಲಿ ಮೂಡಿದರೆ ಉತ್ತಮ ದಿನಗಳ ಕನಸು ನನಸಾಗುವುದು.
-ವಿಧಾತ್ರೀ.ಪಿ.ಎಸ್
No comments:
Post a Comment