Wednesday 21 February 2018

ಸಜ್ಜನರ ಸಂಗದ ಫಲ

                                   ಸಜ್ಜನರ ಸಂಗದ ಫಲ 

ಧರ್ಮಪುರಿ ಎಂಬ ಊರಿನಲ್ಲಿ ಒಬ್ಬ ಪಟೇಲನಿದ್ದ . ಆತನಿಗೆ ಸೋಮು ಎಂಬ ಕೆಟ್ಟಪ್ರವೃತ್ತಿಯ ಮಗನಿದ್ದ . ಕೆಟ್ಟ ನಡತೆಯುಳ್ಳವನಾಗಿದ್ದ ಪಟೇಲನು ಯಾರಿಗೂ ಸಂದೇಹ ಬರದಂತಹ ರೀತಿಯಲ್ಲಿ  ಕಳ್ಳರ ಗುಂಪೊಂದನ್ನು ಊರಿನೊಳಗಿರಿಸಿಕೊಂಡಿದ್ದ. 
ಆ ಕಳ್ಳರ ಗುಂಪಿಗೆ ನಾಯಕನನ್ನು ನೇಮಿಸಿದ್ದ. ಆ ಪಟೇಲನಿಗೆ ಬೇಕಾದಷ್ಟೂ ಆಸ್ತಿ-ಪಾಸ್ತಿ ಇದ್ದರೂ ಕೂಡ ಮತ್ತಷ್ಟು ಹಣ ಗಳಿಸೋ ಆಸೆಯಿತ್ತು . ಆದ್ದರಿಂದ ಸೋಮುವೂ ಕಳ್ಳರಗುಂಪಿನೊಂದಿಗೆ ಸೇರಿ, ಕಳ್ಳತನ ಮಾಡುವುದನ್ನು ಕಲಿತ ಮತ್ತು ತಿದ್ದಿ ಬುದ್ದಿಹೇಳಬೇಕಾದ ತಂದೆ ಆತನನ್ನು ಮತ್ತಷ್ಟು ಮಗನ ಕುಕೃತ್ಯಕ್ಕೆ ಪ್ರೋತ್ಸಾಹಿಸಿದ . 
                   
             ಅದೇ ಊರಿನಲ್ಲಿ ಭದ್ರ ಎಂಬುವವನ ಪುಟ್ಟ ಸಂಸಾರವೂ  ವಾಸಿಸುತಿತ್ತು. ಆತ ತನ್ನ ಮಡದಿ ಮಕ್ಕಳೊಂದಿಗೆ ಸುಖವಾದ ಜೀವನವನ್ನೇ ಸಾಗಿಸುತ್ತಿದ್ದ. ಹಿರಿಯವ ರಾಜು ಹಾಗೂ ಕಿರಿಯವ ರಾಮು. ಇಬ್ಬರು ಮಕ್ಕಳೂ ಅವಳಿಗಳಾದ ಕಾರಣ ಊರಿನಲ್ಲಿ ಜನರಿಗೆ ಅವರಿಬ್ಬರಲ್ಲಿ ಅಣ್ಣ ಮತ್ತು ತಮ್ಮನ ಗುರುತು ಹಿಡಿಯುವುದು ಸ್ವಲ್ಪ ಅಸಾಧ್ಯವೇ ಆಗಿತ್ತು . 
ಇಬ್ಬರೂ ತಮ್ಮ ಊರಿನ ಪಕ್ಕದಲ್ಲಿರೋ ಶಾಲೆಗೇ ತೆರಳುತ್ತಿದ್ದರು. ಈರ್ವರು ಮಕ್ಕಳು ಬುದ್ದಿವಂತರಾಗಿದ್ದರಲ್ಲದೆ,ಇಬ್ಬರು ಮಕ್ಕಳ ಬಗ್ಗೆ ಹೆಡ್ ಮಾಸ್ತರರು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದರು. 
               ಸೋಮುವೂ ಸಹ ಅದೇ ಶಾಲೆಗೇ ಬರುತ್ತಿದ್ದ. ಆದರೆ ರಾಮು ಆತನ ಸ್ನೇಹ ಬೆಳೆಸಿಕೊಂಡ . ಎಷ್ಟೇ ಬುದ್ದಿ ಹೇಳಿದರೂ ಕೂಡ ಲೆಕ್ಕಿಸದೆ ಅವನಜೊತೆ ಸೇರಿ ಗುಟ್ಟಾಗಿ ತೆರಳಿ ಕಳ್ಳತನ ಮಾಡಲು ಪ್ರಾರಂಭಿಸಿದ.  ಹೀಗೆ ಸ್ವಲ್ಪ ಸಮಯದ ಬಳಿಕ  ಇಬ್ಬರೂ ಶಾಲೆಯನ್ನು ಬಿಟ್ಟು ಕಳ್ಳರಗುಂಪನ್ನು ಸೇರಿಕೊಂಡರು. ಕಳ್ಳತನ , ದರೋಡೆಗಳ ಮೂಲಕ ಕುಖ್ಯಾತರೆನಿಸಿಕೊಂಡರು. ಇತ್ತ ರಾಜು ಒಳ್ಳೆಯ ವಿಚಾರಗಳನ್ನು ಬೆಳೆಯುತ್ತಾ; ತನ್ನ ವಿದ್ಯಾಭ್ಯಾಸವನ್ನ ಮುಂದುವರೆಸಿದ ಹಾಗು ಒಬ್ಬ ಒಳ್ಳೆಯ ಮನುಷ್ಯನಾಗಿ ಸಮಾಜದ ವ್ಯಕ್ತಿಯಾದ . 

          ಈಕಡೆ ರಾಮು ಕಳ್ಳತನ ನಡೆಸುವಾಗ ಕದ್ದಮಾಲಿಗೆ ನಡೆದ ಜಗಳದಲ್ಲಿ ಸತ್ತು ಹೋದ. ಆದರೆ ರಾಜುವಿಗೆ ಉತ್ತಮ ಉದ್ಯೋಗ ದೊರಕಿ,ಅದನ್ನ ನಡೆಸುತ್ತಾ ಸಾಮಾಜಿಕ ವ್ಯಕ್ತಿಯಾಗಿ ಬೆಳೆದ  ; ಉತ್ತಮ ಜೇವನವನ್ನು  ಸಾಗಿಸಿದನು. 

                                                                                -ವಿಧಾತ್ರೀ.ಪಿ.ಎಸ್

No comments:

Post a Comment